Monday, May 7, 2007

ಸಾಸಿವೆ

ಇದ್ದಕಿದ್ದಂತೆ ಎದೆ ಹಿಡಿದು
ನೆಲಕ್ಕೊರಗಿದರು ತೇಜಸ್ವಿ ,
ಶಾಲೆಯಿಂದ ಹೊರಟ ಕಂದ
ಬಸ್ಸ ಹೊಡತಕ್ಕೆ ಉತ್ತರಿಸದಾಯಿತು,
ಎಲ್ಲವನ್ನೂ ಎತ್ತಿ ಎಸೆಯುವ ನೀನು
ಸಾವಿನ ಎದುರು ತರಗೆಲೆಯಾಗಿರುವೆಯಲ್ಲ!?
ಬುದ್ಧನಿಗೆಂದು ಸಿಕ್ಕೀತು ಒಗ್ಗರಣೆಗೊಂದಿಷ್ಟು
ಸಾಸಿವೆ!!?


Wednesday, May 2, 2007

ವಾಸ್ತವತೆ

ಕತ್ತಲೆಯು ಕಾಣದ ಕಣ್ಣುಗಳ
ಕೇವಲ ಕುರುಡು ಕಲ್ಪನೆಯಷ್ಟೆ!
ಕಂಡದ್ದೆಲ್ಲವನ್ನು ಕುಡಿದು ಕುಪ್ಪಳಿಸುವ
ಬೆಳಕು ಎಂದಾದರೂ ಬಳಲೀತೆ!?

ಕಂಡ ಕಂಡಲ್ಲೆಲ್ಲಾ ಸುಳ್ಳನ್ನು ಬಿತ್ತಿ,
ಹಣವನ್ನು ಹನಿಸಿ ಹುಸಿ ಹೂವ ಹುಟ್ಟಿಸಿ,
ಕಾಯಿ ಕಟ್ಟಿಸಿದರೂ ಸತ್ಯವೆಂದಾದರೂ
ಸಹಿಸಿ ಸುಮ್ಮನಾದೀತೆ!?